Wednesday, January 12, 2011

ಗಲಿಬಿಲಿ ಇನ್ ಅಸ್ಸೆಂಬ್ಲಿ


ಪ್ರತೀ ಬಾರಿ ವಿಧಾನಸಭೆ ಕಲಾಪ ಏರ್ಪಡಿಸಿದಾಗಲೂ ನೆಡೆಯುವುದು ಈ ಕೆಳಗಿನ ಘಟನೆಗಳು ಮಾತ್ರ!
೧. ಪ್ರತಿಪಕ್ಷಗಳು ಆಡಳಿತ ಪಕ್ಷದ ಯಾವುದೋ ಒಂದು ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುವುದು.
೨. ಆಡಳಿತ ಪಕ್ಷ ಅದನ್ನು ಮಾಡದಿರುವುದು
೩. ಪ್ರತಿಪಕ್ಷಗಳ ಗಲಾಟೆ, ಕೂಗಾಟ, ರಂಪಾಟ, ಬೈಗುಳಗಳು (ಈಗೀಗ ಸೆಡ್ಡು ಹೊಡೆಯುವುದು, ಬಟ್ಟೆ ಹರಿದುಕೊಳ್ಳುವುದು)
೪. ಯಾವುದೇ ವಿಷಯ ಚರ್ಚೆ ಆಗದೆ ಸದನದ ಮುಂದೂಡಿಕೆಯಾಗುವುದು.

ಯಾರಿಗೇ ಆಗಲಿ ಒಂದೇ ಕೆಲಸ ಮಾಡಿ ಮಾಡಿ ಬೇಜಾರಾಗುವುದು ಸಹಜ. ಇದನ್ನೇ ಪ್ರತಿಸಲವೂ ಮಾಡಿ ನಮ್ಮ ರಾಜಕಾರಣಿಗಳಿಗೂ ಒಮ್ಮೆ ಬಹಳ ಬೇಜಾರಾಗಿಹೋಯಿತು. ಕೆಲವರಿಗಂತೂ ವಿಧಾನಸೌಧ ಕಂಡರೆ ವಾಕರಿಕೆ ಬರುವಷ್ಟು ಬೇಸರವಾಗಿಬಿಟ್ಟಿತ್ತು. ಕೆಲವರಂತೂ ಬೆಂಗಳೂರಿನಲ್ಲಿ ವಿಧಾನಸೌಧದ ಅಡ್ರೆಸ್ ಕೇಳಿಕೊಂಡು ಬರುವ ಸ್ಥಿತಿಗೆ ತಲುಪಿಬಿಟ್ಟಿದ್ದರು! ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರುವಾಗ ಮತ್ತೆ ಕಲಾಪಗಳಲ್ಲಿ ಆಸಕ್ತಿ ಮೂಡಿಸಲು ಏನಾದರು ಮಾಡಬೇಕೆಂದುಕೊಂಡು ಒಂದು ಕಮಿಟಿಯನ್ನು ರಚಿಸಲಾಯಿತು. "ವಿಧಾನ ಮಂಡಲ ಕಲಾಪಾಸಕ್ತಿ ಪುನರೋದ್ಧಾರಕ ಸಮಿತಿ" ಅಲಿಯಾಸ್ "ವಿಮಕಪುಸ"!!!

’ವಿಮಕಪುಸ’ ಕಾರ್ಯೋನ್ಮತ್ತವಾಯಿತು! ಮೂರ್ನಾಲಕ್ಕು ತಿಂಗಳು ಹಗಲೂ ರಾತ್ರಿ ಯೋಚಿಸಿದ ಮೇಲೆ ಸಮಿತಿಗೆ ಒಂದು ಉಪಾಯ ಹೊಳೆಯಿತು. ಕಲಾಪ ನೆಡೆಯುವುದಕ್ಕಿಂತ ಒಂದು ದಿನ ಮೊದಲು ಶಾಸಕರ ನಡುವೆ ಸಂಬಂಧಗಳನ್ನು ತಿಳಿಯಾಗಿಸಲು ಎಲ್ಲರನ್ನೂ ವಿಧಾನಸೌಧದಲ್ಲಿ ಸೇರಿಸಿ ಅವರ ನಡುವೆ "ಪ್ರತಿಭಾ ಪ್ರದರ್ಶನ" ಏರ್ಪಡಿಸುವುದು ಎಂದು! ಈ ವರದಿ ಬರುತ್ತಿದ್ದಂತೆಯೇ ಎಲ್ಲ ಶಾಸಕರೂ ತಮ್ಮ ತಮ್ಮ ಪ್ರತಿಭೆಗಳನ್ನು ಹುಡುಕಲು ಪ್ರಾರಂಭಿಸಿದರು. ಯಡಿಯೂರಪ್ಪನವರು ನನ್ನ ಜೊತೆ ಶೋಭೆಯೇ ಇರುವಾಗ ಪ್ರತಿಭೆ ಯಾಕೆ ಬೇಕು ಎಂದು ಅಂದುಕೊಂಡರೂ ಪ್ರತಿಭೆಯೂ ಎಲ್ಲೋ ಇರಬೇಕು ಎಂದು ಅದನ್ನು ಹುಡುಕಿ ಪ್ರದರ್ಶನಕ್ಕೆ ಸಜ್ಜಾದರು. ಮಾರನೆಯ ದಿನವೇ ಕಲಾಪ. "ಇವತ್ತಿನ ದಿನ ಪ್ರತಿಭಾ ಪ್ರದರ್ಶನ!" ಎಂದು ಸ್ಪೀಕರ್ ಘೋಷಿಸಿಬಿಟ್ಟರು.

ಮೊದಲನೆಯ ಅವಕಾಶ ಮಾನ್ಯ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರು ಹಾಡು ಹೇಳಿದರು! ಅವರಿಗೆ ಶೊಭಾ ಹಾಗು ಅವರ ಮಕ್ಕಳು ಸಾಥ್ ನೀಡಿದರು.

ಯಡ್ಡಿ:
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್


ಯಡ್ಡಿ:
ದುಡ್ ಮಾಡ್‌ಬುಟ್ಟೆ ಸಿಕ್ಕಾಪಟ್ಟೆ
ಸಿಕ್ಕಾಪಟ್ಟೆ ದುಡ್ ಮಾಡ್‌ಬುಟ್ಟೆ

ಶೋಭಾ: I like it

ಮಕ್ಕಳು:
ಡ್ಯಾಂವ್ ಡ್ಯಾಂವ್ ಡ್ಯಾಂವ್ ಡ್ಯಾಂವ್
ಡಡಡ ಡ್ಯಾಂವ್ ಡಡಡ ಡ್ಯಾಂವ್

ಯಡ್ಡಿ:
ಡಿನೋಟಿಫೈ ಮಾಡೇಬಟ್ಟೆ ರಾಜ್ಯವನ್ನೇ ಮಾರ್‌ಕಂಡ್‌ಬುಟ್ಟೆ
ರೆಡ್ಡಿಗ್ ಸೆಡ್ಡು ಹೊಡದೇಬುಟ್ಟೆ ಸಿದ್ದುಗ್ ಗುದ್ದು ಕೊಟ್ಟೇಬುಟ್ಟೆ
ಹಂಗೋ ಹಿಂಗೋ ಖುರ್ಚಿಯನ್ನು ಉಳಸ್ಕಂಡೇಬುಟ್ಟೆ
ನಾನು ಸೂಪರೋ ಗೌಡಾ..........

==============================================

ಅಷ್ಟರಲ್ಲಿ ರೇವಣ್ಣ ಎದ್ದುನಿಂತು ಇದು ಪ್ರತಿಭಾ ಪ್ರದರ್ಶನಕ್ಕೆ ಅವಮಾನ. ಇದಕ್ಕೋಸ್ಕರ ಯಡಿಯೂರಪ್ಪನವರು ರಾಜೀನಾಮೆ ಕೊಡ್ಬೇಕು ಎಂದು ವಾದಿಸಿ ತಮ್ಮ ಹಾಡನ್ನು ಶುರುಮಾಡಿದರು.

ರೇವಣ್ಣ:
ಹಗರಣ ಪೇಪರ್ ನನ್ನ ಕೈ ಒಳಗೆ
ಬಿಡು ಕುರ್ಚಿ ನೀನು ಈ ಘಳಿಗೆ
ಅಪ್ಪ ಮಗ ನಾವು ಯಾವುದಕ್ಕು ರೆಡಿ
ಕುರ್ಚಿ ಬಿಟ್ಟು ಮನೆಗೆ ನೆಡಿ

ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ
ಕಳ್ಳ ವೋಟು ಬಿತ್ತು ಅಂದ್ರೆ ಕತ್ತೆ ಕೂಡಾ ಗೆಲ್ಲುವುದು
ಯಾರು ಕತ್ತೆ ಯಾರು ಕುದುರೆ ತೋರಿಸ್ತೀನಿ ನಾನು ಬಿಜೆಪಿ ಸರ್ವನಾಶ ಮಾಡುತೀನಿ

ಒಂದೆ ಮಾಟ ಒಂದೆ ಮಂತ್ರ
ಒಂದೆ ಮಾಟ ಒಂದೆ ಮಂತ್ರ ಎಂದು ಮಾಟ ಮಂತ್ರ ಮಾಡಿ
ಎಷ್ಟು ದಿನ ಇರುತ್ತೀಯಾ ನೊಡುತ್ತೀನಿ ನಾನು ನಿಂಬೆ ಹಣ್ಣು ಮಂತ್ರಿಸಿ ತರುತ್ತೀನಿ

ನಾನೇ ಮುಂದಿನ ಮುಖ್ಯಮಂತ್ರಿ ನೋಡುತಿರು, ಸುಮ್ನೆ ಕುರ್ಚಿ ಬಿಟ್ಟು ಕೊಡು
==============================================

ಬಂಗಾರಪ್ಪನವರು ಗೆಸ್ಟ್ ಅಪಿಯರನ್ಸ್ ನೀಡಿ ಹಾಡಲು ಪ್ರಾರಂಭಿಸಿದರು.

ಬಂಗಾರಪ್ಪ:
ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ
ಯಾರೂ ಕಿಮ್ಮತ್ ಕೊಡ್ತಿರ್‌ಲಿಲ್ಲಾ ಲೈಫಿನಲಿ
ಟಿಕೆಟ್ ಸಿಗೋದ್ ಡೌಟಾಗೋಯ್ತು ಪಾರ್ಟಿಯಲಿ
ಜೆಡಿಸ್ ಕಂಡ್ತು ಸೈಡಿನಲಿ

ಅಷ್ಟರಲ್ಲಿ ಸ್ಪೀಕರ್ ಸಾಹೇಬರು ಅವರ ಬಾಯಿ ಮುಚ್ಚಿಬಿಟ್ಟರು!
==============================================

ಕೊನೆಯಲ್ಲಿ ಕುಳಿತಿದ್ದ ಅಸ್ಪ್ರಶ್ಯರ ಸಾಲಿಗೆ ಸೇರಿದ 13 ಬಂಡಾಯ ಶಾಸಕರು ಒಟ್ಟಿಗೇ ರಾಗ ಶುರುಮಾಡಿಬಿಟ್ಟರು

ಮಂತ್ರಿಗಿರಿ ಬೇಕು ದುಡ್ಡು ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು
ಮಂತ್ರಿಗಿರಿ ಬೇಕು ಹಗರಣ ಮಾಡಲು ಮಂತ್ರಿಗಿರಿ ಬೇಕು
ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಮಂತ್ರಿಗಿರಿ ಬೇಕು ಮಾನ ಹೋದರು ಖುರ್ಚಿಯು ಬೇಕು
ಕಚ್ಚೆಯು ಸಡಿಲವಾಗಿರಬೇಕು ಒಂದು ಸ್ಟೆಪ್ನಿ ಇಟ್ಟಿರಬೇಕು
ನಮ್ಗೆ ಮಾನ ಇಲ್ಲ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
ಊರನು ಖರೀದಿ ಮಾಡಲೆ ಬೇಕು
ನಾವು ಕೂಡಾ ಗುಂಡಾ ಕಣ್ರಿ ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ


ನಾವು ಶಾಸಕರು ತಿನ್ನುವೆವು ಎಲ್ಲ ಹಣವನ್ನು
ಪೆದ್ದು ಜನರುಗಳೆ ಕೇಳಿರಿ
ನೀವ್ ಭಾರಿ ಬೊದ್ದು ಬಿಡ್ರಿ
ತುಂಬ ಶ್ರಮಿಸುವೆವು ಪಡೆಯುವೆವು ಒಳ್ಳೆ ಖಾತೆಯನು
ಕೆಲಸಕೆಂದು ಅಲೆದು ಸಾಯಿರಿ
ನ್ಯಾಯ ನೀತಿ ನೋಡೋದಿಲ್ರಿ
ಮಂತ್ರಿಗಿರಿ ಬೇಕು ಜನರು ಉಗಿದರು ನಗುತಿರಬೇಕು
ನಮ್ಗೆ ಅದು ತಾಗೊದಿಲ್ರಿ
ಮಂತ್ರಿಗಿರಿ ಬೇಕು ಮಿತ್ರನ ಮಡದಿಯ ಪ್ರೀತಿಸಬೇಕು
ಪೋಲಿತನ ರಕ್ತದಿ ಬೆರೆತಿರಬೇಕು ಡೀಸೆಂಟ್ ಪೋಸು ನೀಡಬೇಕು
ನಾವು ತುಂಬಾ ಸಾಚಾ ಕಣ್ರಿ
ನರ್ಸ್ ಜೊತೆ ಡ್ಯಾನ್ಸ್ ಮಾಡಲೆ ಬೇಕು
ಥಕ ಧಿಮಿ ಥಕ ಝಣು ನಮ್ಗೂ ಕೊಡ್ರಿ ನಮ್ಗೂ ಕೊಡ್ರಿ
==============================================

ಇದನ್ನೆಲ್ಲ ನೋಡಿ ತಲೆ ಚಚ್ಚಿಕೊಳ್ಳುತ್ತಾ ಸ್ಪೀಕರ್ ಸಾಹೀಬ್ರು, ಪ್ರತಿಭಾ ಪ್ರದರ್ಶನವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಬಿಟ್ಟರು!

ಇದನ್ನು ನೋಡುತ್ತಾ ಕುಳಿತ ಜನಸಾಮಾನ್ಯರು ತಮ್ಮಲ್ಲೇ ತಾವು ಹಾಡಿಕೊಂಡರು.

ತುಂಬಾ ಟೆನ್ಷನ್ ಮಾಡ್ಕೋ ಬೇಡಿ
ರಾಜಕೀಯ ಹಿಂಗೇ ನೋಡ್ರಿ
ಅವರಿಗ್ ಬುದ್ಧಿ ಬರೋದಿಲ್ರಿ
ಲೈಫು ಇಷ್ಟೇನೇ...

ದುಡ್ಡೇ ಉಣ್ಣೋ ನಮ್ಮ ಮುಖಂಡ
ಇವ್ನಿಗ್ ವೋಟ್ ಹಾಕೋದ್ ದಂಡ
ನಂಬಿ ಕೆಟ್ವಿ ಇವನಜ್ಜಿ ಪಿಂಡ
ಲೈಫು ಇಷ್ಟೇನೇ...

ಹಗರಣದ್ ಮೇಲೆ ಹಗರಣ ಬಂದು
ಜನಸಾಮಾನ್ಯ ಬೆಂದು ನೊಂದು
ಕೊನೆಯಲಿ ತನ್ನನು ತಾನೆ ಕೊಂದು
ಲೈಫು ಇಷ್ಟೇನೇ...

[ಸೂಚನೆ: ಇದು ಕೇವಲ ಕಾಲ್ಪನಿಕ. ನಮ್ಮ ವಿಧಾನಸೌಧದಲ್ಲಿ ಇಷ್ಟೇ ನೆಡೆದರೆ ನಮ್ಮ ಸೌಭಾಗ್ಯ!]

14 comments:

Unknown said...

Soooper Bhattare..:)

Unknown said...

ಸಿಕ್ಕಾಪಟ್ಟೆ ಇಷ್ಟಪಟ್ಟೆ ... ಇಷ್ಟಪಟ್ಟೆ ಸಿಕ್ಕಾಪಟ್ಟೆ
ನೀನು ಸೂಪರ್ ಓ ಭಟ್ಟ !!!

ಭಟ್ರೇ ಅದ್ಬಿದ್ದೆ ನಿಮ್ಮ ಸಾಹಿತ್ಯಕ್ಕೆ ... ತುಂಬಾ ದಿನದ ನಂತರ ನಿಮ್ಮ ಬ್ಲಾಗ್ ಓದಿದ್ದು.

pintu said...

full khushi aytu odibittu good one

ದೀಪಕ said...

ನೀವು ಸೂಪರ್ರೀ ... ಭಟ್ರೇ :)
ಯೋಗರಾಜ ಭಟ್ರ ಸಾಹಿತ್ಯವನ್ನು ಸಿದ್ಧಾರ್ಥ ಭಟ್ರು ಸೂಪರ್ರಾಗಿ ರೀಮಿಕ್ಸ್ ಮಾಡಿದ್ದೀರಿ.

ಸಿಕ್ಕಾಪಟ್ಟೇ ಇಷ್ಟಾಪಟ್ಟೇ ..
I LIKE IT :)

- ದೀಪಕ

ಸಿದ್ಧಾರ್ಥ said...

ಎಲ್ರಿಗೂ ತುಂಬಾ ಧನ್ಯವಾದಗಳು. ಬರ್ತಾ ಇರಿ.. :)

Unknown said...

I like it... I like it.. Everybody will like it no problem...

Ottare Suuuuper..........

ಸಿದ್ಧಾರ್ಥ said...

@vivek
Dhanyavaada :)

Giri said...

ಸಕತ್ತಾಗಿದೆ..

Unknown said...

Simply superb!!!

ಸಿದ್ಧಾರ್ಥ said...

@Giri, Vijay
Dhanyavaadagalu...

Vijay Kumar Gorabal said...

Sandalwood remix hits 2010:)
13 bandaaya shaasakaru haadiddu yaav song?

ಸಿದ್ಧಾರ್ಥ said...

@vijay
Adu Bhattara "Hudugaru Beku... Kuriya mari thara, Hudugaru Beku" remix... Pancharangi chitradinda.

Karna Natikar said...

ninu superrrro Sidda...

ಸಿದ್ಧಾರ್ಥ said...

@Karna
Tumbaa thanks kanree :)