
ಹೈಸ್ಕೂಲಿನಲ್ಲೆಲ್ಲಾ ನಾನು, ಸಂತೋಷ ಮತ್ತೆ ಕಿರಣ, ತ್ರಿಮೂರ್ತಿಗಳು ಎಂದೇ ಪ್ರಸಿದ್ಧ. ಈ ಮೂವರು ಸೇರಿಬಿಟ್ಟೆವು ಅಂದರೆ ಸಧ್ಯದಲ್ಲೇ ಏನೋ ಒಂದು ಕಿತಾಪತಿ ನೆಡೆಯಲೇ ಬೇಕು. ಕಿರಣ ಬಯಲುಸೀಮೆಯ ಹುಡುಗ. ಎಲ್ಲದರಲ್ಲೂ ಹುರುಪು ಜಾಸ್ತಿ. ಸಂತೋಷ ಎಲ್ಲದನ್ನೂ ವಿಚಾರಿಸಿ ಜಾಗರೂಕತೆಯಿಂದ ಹೆಜ್ಜೆಯಿಡುವವ. ನಾನು ಅವರು ಏನೇ ಹೇಳಿದರೂ ಜೈ ಎನ್ನುವ ಹಿಂಬಾಲಕ. ಮೂರೂ ಜನರ ಮನೆ ಹತ್ತಿರವೇ ಇದ್ದುದರಿಂದ ಶಾಲೆ ಮುಗಿದ ಮೇಲೆ ಅಥವಾ ರಜಾ ದಿನಗಳಲ್ಲಿ ಬರೀ ಕಂಡವರ ಮನೆಗೆ ಕಲ್ಲೊಗೆಯುವುದೇ ವಿಚಾರಗಳು. ಸಂತೋಷನ ಮನೆಯಿರುವುದು ಶಿರಸಿ ಯಲ್ಲಾಪುರ ಮೇನ್ ರೋಡ್ನಲ್ಲಿ. ಆ ದಾರಿಯಲ್ಲಿ ಯಾವಾಗಲೂ ಜನಸಂಚಾರ ವಾಹನಸಂಚಾರ. ಸಂತೋಷನ ಮನೆಯ ಎದುರುಗಡೆಯೇ ಇನ್ನೊಂದು ಮನೆಯಲ್ಲಿ ರೋಡಿಗೆ ತಾಗಿದಂತೆಯೇ ಬೆಳೆದ ಒಂದು ತೋತಾಪುರಿ ಮವಿನಮರ (ಗೋವೆ ಮಾವಿನಕಾಯಿ). ಆ ವರ್ಷ ಎಷ್ಟೊಂದು ಕಾಯಿ ಬಿಟ್ಟಿತ್ತೆಂದರೆ ಮರದಲ್ಲಿ ಎಲೆಗಳೇ ಕಾಯಿಗಳಿಗಿಂತ ಕಡಿಮೆಯೇನೋ ಎನಿಸುತ್ತಿತ್ತು. ಅದೂ ಅಲ್ಲದೆ ಎಲ್ಲಾ ಮಿಡಿಗಳು ಬೆಳೆದು ನಿಂತಾಗ ಮರದ ತುಂಬೆಲ್ಲಾ ಬಾಂಗಡೆ ಮೀನು ಜೋತು ಬಿಟ್ಟಿದ್ದಂತೆ ಕಾಣುತ್ತಿತ್ತು.
ಪ್ರತೀ ದಿನ ಅದೇ ದಾರಿಯಲ್ಲಿ ಶಾಲೆಗೆ ಹೋಗಿ ಹಿಂತಿರುಗುವಾಗ ನಮ್ಮ ಮೂವರ ಕಣ್ಣೂ ಅದೇ ಮರದ ಮೇಲೆ ನೆಟ್ಟಿರುತ್ತಿತ್ತು. ಹೇಗಾದರೂ ಮಾಡಿ ಆ ಮರದ ಮಾವಿನಕಾಯಿಗಳನ್ನು ಹುಡಿಮಾಡಲೇ ಬೇಕು ಎಂಬ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಂಡುಬಿಟ್ಟೆವು. ಸರಿ, ಈಗ ಆ ದೊಡ್ಡ ಪ್ರಾಜೆಕ್ಟ್ಗೆ ಪ್ಲಾನಿಂಗ್ ಬೇಕಲ್ಲ! ಸಂತೋಷ ಮಾರನೇ ದಿವಸವೇ ಪ್ಲಾನ್ ಸಿದ್ಧಪಡಿಸಿಕೊಂಡು ಬಂದ. ಆ ಮರಕ್ಕೇ ತಾಗಿ ಅವರ ಕಂಪೌಂಡ್ ಪಕ್ಕದಲ್ಲಿ ಒಂದು ಹೇರ್ ಕಟಿಂಗ್ ಸಲೂನ್. ಪ್ಲಾನ್ ಏನಪ್ಪಾ ಅಂದ್ರೆ, ಯಾರೂ ಇಲ್ಲದ ಸಮಯದಲ್ಲಿ, ಹೇರ್ ಕಟಿಂಗ್ ಸಲೂನ್ನ ಹಂಚಿನ ಮೇಲೆ ಹತ್ತಿ, ಮಾವಿನಕಾಯಿ ಕದಿಯುವುದು ಎಂದು. ಆದರೆ ಯಾರೂ ಇಲ್ಲದ ಸಮಯ ಅಂದರೆ ಒಂದೋ ರಾತ್ರಿ ಹನ್ನೊಂದು ಘಂಟೆ ಮೇಲೆ. ಇಲ್ಲವೋ ಬೆಳಿಗ್ಗೆ ಆರು ಘಂಟೆ ಒಳಗೆ. ರಾತ್ರಿ ಮನೆಯಿಂದ ಹೊರಬರುವ ಪರವಾನಿಗೆ ನಮಗಂತೂ ಖಂಡಿತ ಸಿಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮುಹೂರ್ತವಿಟ್ಟಿಕೊಳ್ಳಬೇಕು. ಆದರೆ ಆಗಲೂ ಅಷ್ಟು ಬೆಳಿಗ್ಗೆ ಮನೆಯಿಂದ ಹೊರಬರುವುದು ಹೇಗೆ? ಅದಕ್ಕೂ ಸಂತೋಷನಲ್ಲಿ ಒಂದು ಪ್ಲಾನ್ ಇತ್ತು. ಬೆಳಿಗ್ಗೆ ಕಾಲೇಜ್ ರೋಡಿನಲ್ಲಿ ಸೈಕ್ಲಿಂಗ್ಗೆ ಹೋಗುವುದು ಎಂದು. ಸರಿ ಶುರುವಾಯಿತು ನಮ್ಮ ಬೆಳಗಿನ ಸೈಕ್ಲಿಂಗ್ ಎಕ್ಸರ್ಸೈಜ್.
ಮೊದಲನೇ ದಿನ ಏಳುವುದೇ ತಡವಾಗಿ, ನಾನು ಮತ್ತು ಕಿರಣ ಸಂತೋಷನ ಮನೆ ಮುಟ್ಟಿದಾಗ ಆಗಲೇ 6:30 ಆಗಿಹೋಗಿತ್ತು. ರೋಡ್ ತುಂಬಾ ವಾಕಿಂಗ್ ಮಾಡುವವರು ಜಾಗಿಂಗ್ ಮಾಡುವವರು ತುಂಬಿಹೋಗಿದ್ದರು. ನಾವು ಸುಮ್ಮನೇ ಕಾಲೇಜ್ ವರೆಗೆ ಸೈಕಲ್ ಹೊಡೆದುಕೊಂಡು ವಾಪಸ್ ಬರಬೇಕಾಯಿತು. ಮಾರನೇ ದಿನ ಆರು ಘಂಟೆಗೇ ಆಪರೇಷನ್ ಸ್ಪಾಟ್ ತಲುಪಿದರೂ ಪ್ರಯೋಜನವಾಗಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ವಾಕಿಂಗ್ಗೆ ಆಗಲೇ ಹೊರಟಾಗಿತ್ತು. ಮೂರನೇ ದಿನ, ಅಂತೂ ಬಹಳ ಬೇಗನೆ ಅಲ್ಲಿಗೆ ತಲುಪಿದೆವು. ಸಂತೋಷನನ್ನು ಎಬ್ಬಿಸಿ ಮಾವಿನಮರದ ಮನೆಗೆ ಬಂದು ಮುಟ್ಟಿದೆವು. ಆದರೆ ಯಾರೂ ಸೈಕಲ್ ಬಿಟ್ಟು ಕೆಳಗಿಳಿಯುತ್ತಲೇ ಇಲ್ಲ. ಒಬ್ಬರ ಮುಖ ಇನ್ನೊಬ್ಬರು ಮಿಕಿ ಮಿಕಿ ನೋಡುತ್ತಾ ಅಪರಿಚಿತರಂತೆ ವರ್ತಿಸತೊಡಗಿದೆವು. ಹೀಗೇ ಒಂದೈದು ನಿಮಿಷ ಕಳೆದ ಮೇಲೆ ಸಂತೋಷ ಕಿರಣನಿಗೆ, "ಯಾಕೋ ಕಾಯ್ತಿದೀಯಾ? ಮಾವಿನ್ ಕಾಯಿ ನಿನ್ನ ಕಿಸೆಗೆ ಬಂದ್ ಬೀಳ್ತದಾ? ಹೋಗಿ ಕಿತ್ಕೊಂಡ್ ಬಾರೋ" ಎಂದ. ಕೂಡಲೇ ಕಿರಣ "ನಾನೇ ಯಾಕ್ ಹೋಗ್ಬೇಕು? ನೀನು ಹೋದ್ರೆ ಮಾವಿನ್ಕಾಯಿ ಬರಲ್ಲಾ ಅಂತದಾ?" ಎಂದು ಅವನಿಗೇ ತಿರುಗಿಸಿದ. ಸಂತೋಷ ಅಷ್ಟರಲ್ಲೇ ಜಾಗರೂಕನಾಗಿ "ಹೋಗ್ಲಿ ಬಿಡು ಸಿದ್ದು ತರ್ತಾನೆ" ಎಂದು ನನ್ನ ಮೇಲೆ ಹಾಕಿಬಿಟ್ಟ. ನನಗೆ ಒಮ್ಮೆಲೇ ಕೈ ಕಾಲು ನಡುಗಲು ಶುರುವಾಯಿತು. ನಾನು ಹೋಗಲ್ಲಪ್ಪಾ ಎಂದೆ. ಯಾಕೆ ಎಂದು ಕೇಳಿದಾಗ ಉತ್ತರವೇ ಇಲ್ಲ. ಒಟ್ಟಿನಲ್ಲಿ ಅಂಗಡಿ ಹತ್ತುವುದು ಯಾರು ಎಂದು ನಿಶ್ಚಯಿಸುವುದರಲ್ಲಿ ಆಗಲೇ ಬೆಳಕಾಗಿತ್ತು. ವಾಕಿಂಗ್ ಮಾಡುವವರು ರೋಡನ್ನೇ ದಿಟ್ಟಿಸುತ್ತಾ ಸಿಟ್ಟುಮಾಡಿಕೊಂಡವರಂತೆ ಬೇಗನೆ ಹೆಜ್ಜೆಹಾಕುತ್ತಿದ್ದರು.
ಮಾರನೇ ದಿನ ಹೊರಡುವ ಮುಂಚೆಯೇ ಕಿರಣನೇ ಹತ್ತಿ ಮಾವಿನಕಾಯಿ ಕೊಯ್ಯುವುದು ಎಂದು ನಿಶ್ಚಯಿಸಿ ಆಗಿತ್ತು. ಬೆಳಿಗ್ಗೆ 5:30ಕ್ಕೇ ಆಪರೇಷನ್ ಸ್ಪಾಟ್ ತಲುಪಿದೆವು. ಸಂತೋಷ ಕೆಳಗೇ ನಿಂತು ಒಂದು ಪ್ಲಾಸ್ಟಿಕ್ ಲಕೋಟೆ ಹಿಡಿದುಕೊಂಡಿದ್ದ. ಕಿತ್ತು ಎಸೆದ ಮಾವಿನಕಾಯಿಗಳನ್ನೆಲ್ಲಾ ಆರಿಸುವುದು ಅವನ ಕೆಲಸ. ನಾನು ಆ ಮನೆಯ ಕಂಪೌಂಡ್ ಹತ್ತಿ ನಿಂತಿದ್ದೆ. ಪಕ್ಕದಲ್ಲಿನ ಹೇರ್ ಕಟಿಂಗ್ ಸಲೂನ್ ಹಂಚನ್ನು ಹತ್ತಲು ಇಳಿಯಲು ಕಿರಣನಿಗೆ ಸಹಾಯ ಮಾಡಲು. ಕಿರಣ ಅಂತೂ ಸಾಹಸ ಮಾಡಿ ಹಂಚನ್ನು ಏರಿ ಕುಳಿತಿದ್ದ. ಮರ ತಲುಪಲು ಸ್ವಲ್ಪ ಮೇಲಕ್ಕೆ ಹೋಗಬೇಕಿತ್ತು. ಅವನು ಹೆಜ್ಜೆಯಿಟ್ಟಾಗಲೆಲ್ಲಾ ಹಂಚಿನ ಸದ್ದಾಗಿ ನನಗೆ ಭಯವಾಗುತ್ತಿತ್ತು. ಸಂತೋಷ ಕೆಳಗಿನಿಂದಲೇ ಮೆಲ್ಲಗೆ ಹೋಗೋ ಎನ್ನುತ್ತಿದ್ದ. ಯಾವುದೋ ಬ್ಯಾಂಕ್ ದರೋಡೆ ಮಾಡುತ್ತಿರುವವರಂತೆ ಮೂರರದೂ ಗಂಭೀರ ಮುಖಭಾವ. ಇನ್ನೇನು ಕಿರಣ ಮಾವಿನ ಮರ ಮುಟ್ಟಿ ಮಿಡಿಗಳನ್ನು ಕೀಳಲು ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ಹಂಚಿನ ಮೇಲೆ ಮಲಗಿದ್ದ ಓತಿಕ್ಯಾತವೊಂದು ಅವನು ಕಾಲಿಟ್ಟ ರಭಸಕ್ಕೆ ಎಚ್ಚರಗೊಂಡು ಅವನ ಕಾಲಮೇಲೆಯೇ ದಾಟಿ ಓಡಿಹೋಯಿತು. ಮೊದಲೇ ಹೆದರಿದ್ದ ಕಿರಣ ಕಾಲಹತ್ತಿರವೂ ನೋಡದೆ "ಆಯ್ಯೋ... ಹಾವು... ಹಾವು..." ಎಂದು ಚೀರಿ ಹಂಚಿನಿಂದ ಒಮ್ಮೆಲೇ ಕೆಳಗೆ ಜಿಗಿದೇಬಿಟ್ಟ. ಅವನು ಚೀರಿದ ರಭಸಕ್ಕೆ ಮನೆಯಲ್ಲಿನ ನಾಯಿ ಬೊಗಳತೊಡಗಿತು. ಓಡಿ ಜಿಗಿಯುವ ಭರಾಟಿಯಲ್ಲಿ ಒಂದೆರಡು ಹಂಚುಗಳೂ ಮುರಿದುಹೋದವು. ಮೊದಲೇ ಹೆದರಿದ್ದ ನಮ್ಮಿಬ್ಬರಿಗೆ ಏನಾಯಿತು ಎಂದೇ ತಿಳಿಯಲಿಲ್ಲ. ಒಂದೇ ನೆಗೆತಕ್ಕೆ ಸೈಕಲ್ ಏರಿ ಎರಡು ಕಿಲೋಮೀಟರ್ ದೂರ ಬಂದುಬಿಟ್ಟಿದ್ದೆವು. ಹಿಂದೆ ತಿರುಗಿ ನೋಡಿದರೆ ಕಿರಣ ಸೈಕಲನ್ನು ಹತ್ತಲೂ ಪುರುಸೊತ್ತಿಲ್ಲದೆ ತಳ್ಳಿಕೊಂಡೇ ಓಡಿಬರುತ್ತಿದ್ದ.
12 comments:
one of the nice blog i have read :) just got me into those days in sirsi...
i could remember santosh and kiran, kiran is that same guy who lived some wer in Marathi koppa right?
Nice work.. keep going...
Sannavariddaga ragad jigdyadeeri andhanga aaytu...
:))
Hinga barita iru.....
U halped me reaclling my operations :)
@vijaykumar
Thanks viju...
u r right. i dont know what he is doing nowadays.
@vijay, gundapi
dhanyavaadagalu...
ನಮಸ್ಕಾರ/\:)
ನಿನ್ನ ಧೈರ್ಯ ಸಾಹಸದ ಕಥೆ ಕೇಳಿ ಬಹಳ ಆನ೦ದವಾಯಿತು. ನಿನ್ನ ನೆನಪಿನ೦ಗಳದಲ್ಲಿ ಇದನ್ನು ಮರುಸೃಷ್ಟಿ ಮಾಡಿದ್ದಕ್ಕೆ ಧನ್ಯವಾದಗಳು.
ಇ೦ತಿ,
ದೀಪಕ
ನಿನ್ನ ಲೇಖನ ಒದಿ ನಾನು ಚಿಕ್ಕವನಿದ್ದಾಗ ಮಾಡಿದ ಕಿತಾಪತಿ ಕೆಲ್ಸ ಎಲ್ಲವೂ ನೆನೆಪು ಬಂದ್ವು.ಲೈಟ್ ಕಂಬದ ಲೈಟ್ ಒದೆದದ್ದು, ಮೊದಲ ಸಲ ಬೈಕ್ ತೆಗೆದೊಕೊಂಡು ಹೋಗಿ front gear ಮುರಿದದ್ದು etc... :)
@ದೀಪಕ, ಕರ್ಣ
ಧನ್ಯವಾದಗಳು.. ಹೀಗೇ ಬಂದು ಹೋಗುತ್ತಿರಿ.
ಪ್ರಿಯ ಸಿದ್ಧಾರ್ಥ್,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
Sidda, Outstanding Article....really too good..
Thanks,
Basu
@basu
tumba dhanyavaadagalu...
Neevu upayogisida kannada bahala chennagide..
kannadadalli kivige impu koduva padagale hechu. Kannadave impu.
Marathe hogiruwa padagalannu nenapisidake anantha anantha danyawaadagalu.
- kathe tumba chennagi moodi bandide..
bengaloorinalli , maavina maragalu kadimeyaagide :( ,duddu kottu tinnuwa makkale hechu, marakke guri ittu kallu hodedu kaai bilisi tinnuvudara majave bere alwa :)
adarallu kaddu mucchi tinuva majave bere :)
Post a Comment