Tuesday, April 14, 2015

ಹುಣ್ಣು

ಭವಿಷ್ಯದಲ್ಲಿ ಏನಾಗುಬಹುದು ಎಂದು ಸರಿಯಾಗಿ ಊಹಿಸುವವನು... ಅಥವಾ ಈಗಿನ ಸಮಸ್ಯೆಗೆ ಹೀಗೆ ಮಾಡಿದರೆ ಭವಿಷ್ಯದಲ್ಲಿ ಇದಕ್ಕೆ ಪರಿಹಾರ ಸಿಗಬಹುದು ಎಂದು ಸರಿಯಾದ ಹೆಜ್ಜೆ ಇಡುವವನು ದಾರ್ಶನಿಕ (visionary). ಯಾಕೋ ಇವತ್ತಿನ ಪರಿಸ್ಥಿತಿ ನೋಡಿದರೆ ನಿಮ್ಮ ಜನರನ್ನು ನೀವೇ ಅರ್ಥ ಮಾಡಿಕೊಂಡಿರಲಿಲ್ಲ ಎನಿಸುತ್ತಿದೆ! 

Anyway... ಡಾ. ಅಂಬೇಡ್ಕರರ ಜಯಂತಿಯ ಪ್ರಯುಕ್ತ .. ನಾಡಿನ ಸಮಸ್ತ ಬುದ್ಧಿಜೀವಿಗಳಿಗೆ ನನ್ನ ಒಂದು ಚಿಕ್ಕ ಕೊಡುಗೆ..

ವಿರೋಧಕ್ಕಾಗಿ ಹೋರಾಟ ಬೀದಿಗಳಲ್ಲಿ ಬಯಲಾಟ
ಪ್ರಚಾರಕ್ಕಾಗಿ ಹಾರಾಟ ಆದರ್ಶಗಳ ಮಾರಾಟ
ನಿಜವಾಗಿಯೂ ಏಳ್ಗೆಯ ಕನಸನ್ನು ಕಂಡೆಯಾ
ಅಥವಾ ಕಣ್ಣು ಮುಚ್ಚಿ ದನದ ಮಾಂಸ ತಿಂದೆಯಾ?


ಜ್ನಾನಕ್ಕೆ ಪೀಠವೇ ಪೀಠಕ್ಕೆ ಜಾತಿಯೇ
ಶಾರದೆಗೂ ಜಾತಿಯ ಮೇಲೆಯೇ ಪ್ರೀತಿಯೇ
ಆ ಜಾತಿ ಈ ಜಾತಿ ಎಲ್ಲಾ ಒಂದೇ ಜಾತಿ
ಹುಣ್ಣಾದರೆ ಕೆರೆದುಕೊಳ್ಳುವ ಜಾತಿ

ನೋಡಿದರು ಕೆಲವರು ಹುಣ್ಣಿಗೆ ಮುಲಾಮು ಹಚ್ಚಿ
ನೋಡಿದರು ಕೆಲವರು ತಮ್ಮ ಬಾಯಿ ಮುಚ್ಚಿ
ಮಾಸಿತೆಂದುಕೊಂಡರೆ ಹುಣ್ಣು ಹುಟ್ಟಿತೆಲೆ ಮತ್ತೊಂದು
ಕೆಲವರು ಸುಖಿಸಿದರು ಹುಣ್ಣನ್ನು ಪರರಿಗೆ ಹಚ್ಚಿ

- ಸಿದ್ಧಾರ್ಥ