
ಭಾವನೆಗಳಿಗೆ ರೂಪ ಹೇಗೆ ನೀಡಲಿ
ಪದಗಳು ಅಡಗಿವೆ ಮರೆಯಲಿ
ಸಂತಸವ ಜನರೊಳು ಹೇಗೆ ಹಂಚಲಿ
ಮಿಂಚು ಹೊಮ್ಮಿದೆ ಮನದಲಿ
ಅರಿಯದ ಅನೇಕ ಭಾವ ಹೊಮ್ಮಿದೆ
ನಿನ್ನ ನಗೆಯ ಮಾಟದಿ
ಕಾಣದ ಲೋಕವ ಕಂಡು ಸುಖಿಸಿದೆ
ನಿನ್ನ ಕಂಗಳ ನೋಟದಿ
ಮುದ್ದು ಕೃಷ್ಣನೆ ಹಿಗ್ಗು ತಂದಿಹೆ
ನಮ್ಮ ಬಾಳನು ಬೆಳಗುತಾ
ಮೌನ ಗೀತೆಯ ಮನದಿ ತುಂಬಿದೆ
ನವ ಚೈತನ್ಯವ ಬೀರುತಾ
23-02-2011 ಬುಧವಾರ, ಮಾಘ ಬಹುಳ ಪಂಚಮಿಯಂದು ನನಗೆ ಅಪ್ಪನ ಸ್ಥಾನಕ್ಕೆ ಬಡ್ತಿ ಸಿಕ್ಕಿದೆ! ಕುಮಾರ ಕಂಠೀರವ ಧರೆಗೆ ಕಾಲಿಟ್ಟಿದ್ದಾನೆ.
5 comments:
ನಮಸ್ಕಾರ ಭಟ್ರೇ,
ಮಗನ ಆಗಮನ ಕುರಿತಾದ ಕವನ ಸು೦ದರವಾಗಿದೆ.
ತ೦ದೆಯ ಸ್ಥಾನಕ್ಕೆ ಭಡ್ತಿ ಪಡೆದು ಹೊಸದೊ೦ದು ಅನುಭವಕ್ಕೆ ಸಜ್ಜಾಗುತ್ತಿದ್ದೀರ.
ನಿಮಗೆ ಅಭಿನ೦ದನೆಗಳು.
- ದೀಪಕ
ಸಿದ್ಧಾರ್ಥ,
ಶುಭಾಶಯಗಳು.
ಧನ್ಯವಾದಗಳು, ದೀಪಕ್ ಹಾಗು ಸುನಾಥ್ ಅವರಿಗೆ.
Congrats Siddarth
@Viji
Thanks viji
Post a Comment