Thursday, August 14, 2008

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು


ರಚನೆ: ಶ್ರೀಯುತ ಚಂದ್ರಶೇಖರ ಭಂಡಾರಿ


ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು
ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ ಮಹಿಮೆಯು
ಬಣ್ಣಿಸಲಸದಳವು ಬಣ್ಣಿಸಲಸದಳವು

ಧವಳ ಹಿಮಾಲಯ ಮಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು

ಕಾಶ್ಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂಫಲವು ನಮ್ಮೀ ತಾಯ್ನೆಲವು

ಪುಣ್ಯವಂತರಿಗೆ ಇದುವೇ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಅಭಯದಾಯಕ
ಯುಗಯುಗದೀ ನಿಲುವು ನಮ್ಮೀ ತಾಯ್ನೆಲವು

ಆಡಿಯೋ ಕೇಳಲು ಇಲ್ಲಿ ಕ್ಲಿಕ್ಕಿಸಿ

ಜನನಿ ಜನ್ಮಭೂಮಿ


ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಒಂದು ದೇಶಭಕ್ತಿಗೀತೆ. ರಚಿಸಿದವರು ಯಾರೆಂಬುದು ನನಗೆ ಗೊತ್ತಿಲ್ಲ. ಭಾರತಮಾತೆಯ ಅಕ್ಕರೆಯ ಮಗ ಎಂದಷ್ಟೇ ಹೇಳಬಹುದು.

ಜನನಿ ಜನ್ಮಭೂಮಿ ಸ್ವರ್ಗಸೇ ಮಹಾನ್ ಹೇ
ಇಸಕೆ ವಾಸತೇ ಯೇ ತನ ಹೇ ಮನ ಹೇ ಓರ್ ಪ್ರಾಣ ಹೇ

ಇಸ್ಕೆ ಕಣ ಕಣಪೆ ಲಿಖಾ ರಾಮ ಕೃಷ್ಣ ನಾಮ ಹೇ
ಹುತಾತ್ಮವೋಂ ಕಿ ರುಧಿರಸೇ ಭೂಮಿ ಸಸ್ಯ ಶ್ಯಾಮ ಹೇ
ಧರ್ಮಕಾ ಯೆ ಧಾಮ ಹೇ ಸದಾ ಇಸೇ ಪ್ರಣಾಮ ಹೇ
ಸ್ವತಂತ್ರ ಹೇ ಯಹ ಧರಾ ಸ್ವತಂತ್ರ ಆಸಮಾನ ಹೇ


ಇಸ್ಕೆ ಆನಪೇ ಅಗರ್ ಜೋ ಬಾತ ಕೋಯಿ ಆಪಡೇ
ಇಸ್ಕೆ ಸಾಮನೇ ಜೋ ಜುಲ್ಮಕೇ ಪಹಾಡ ಹೋ ಖಡೇ
ಶತ್ರು ಸಬ್ ಜಹಾನ್ ಹೋ ವಿರುದ್ಧ ಆಸಮಾನ ಹೋ
ಮುಕಾಬಲಾ ಕರೇಂಗೆ ಜಬ್ ತಕ್ ಜಾನ ಮೇ ಯೇ ಜಾನ ಹೇ


ಇಸ್ಕೆ ಗೋದಮೇ ಹಸಾರೊ ಗಂಗಾ ಯಮುನಾ ಝೂಮತೀ
ಇಸ್ಕೆ ಪರ್ವತೋಂಕಿ ಚೋಟಿಯಾ ಗಗನಕೊ ಚೂಮತೀ
ಭೂಮಿಯೇ ಮಹಾನ ಹೇ ನಿರಾಲಿ ಇಸಕಿ ಶಾನ ಹೇ
ಇಸ್ಕೆ ಜಯ ಪತಾಕಪೇ ಲಿಖಾ ವಿಜಯ ನಿಶಾನ ಹೇ


ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

ಭಾರತ್ ಮಾತಾ ಕೀ... ಜೈ.

Wednesday, August 13, 2008

ವಂದೇ ಮಾತರಂ


ಪೂರ್ತಿ ವಂದೇ ಮಾತರಂ ಹೇಳಿಬಿಟ್ಟರೆ ಮುಸಲ್ಮಾನ್ ಬಾಂಧವರಿಗೆ ನೋವಾಗಿಬಿಡುತ್ತದೆ ಎನ್ನುವುದಕ್ಕೋಸ್ಕರ ಕೇವಲ ಮೊದಲೆರಡು ಪ್ಯಾರಾಗಳನ್ನಷ್ಟೇ ಹೇಳಬೇಕೆಂದು ನಮ್ಮ ನೆಹರೂ ಸರ್ಕಾರ ಘೋಷಿಸಿಬಿಟ್ಟಿತ್ತು. ಆಗಿನಿಂದ ಕೇವಲ ಎರಡೇ ಎರಡು ಪ್ಯಾರಾಗಳನ್ನು ಹೇಳಿ ಹೇಳಿ ನಮ್ಮ ಹುಡುಗರಿಗೆ "ವಂದೇ ಮಾತರಂ" ಗೀತೆ ಇಷ್ಟೇ ಇದೆ ಎಂಬ ಕಲ್ಪನೆ ಬಂದುಬಿಟ್ಟಿದೆ. ಕೇವಲ ಪ್ರಾಕೃತಿಕ ವರ್ಣನೆಯಿರುವ ಈ ಸಾಲುಗಳಿಂದ ತಾಯ್ನಾಡಿಗೋಸ್ಕರ ಪ್ರಾಣವನ್ನೇ ಕೊಡಲು ಜನ ಹೇಗೆ ಸಿದ್ಧರಾದರೆಂದು ಕೆಲವರಿಗೆ ಅನಿಸಿರಲೂ ಬಹುದು. ಆದರೆ ಪೂರ್ತಿ ಹಾಡನ್ನು ಕೇಳಿದಾಗ ಎಂಥವನಲ್ಲಾದರೂ ದೇಶಪ್ರೇಮ ಉಕ್ಕಿಸುವಂಥಹ ಗೀತೆ "ವಂದೇ ಮಾತರಂ". ದೇಶದ ಮೇಲೆ ಪ್ರೀತಿಯೇ ಇರದ, ಕೇವಲ ತಾವು ತಮ್ಮವರು ತಮ್ಮ ಧರ್ಮ ಎನ್ನುವ ಕೆಲವರಿಗೋಸ್ಕರ ತಾಯಿಯನ್ನು "ತಾಯಿ, ನೀನು ಅಬಲೆಯಲ್ಲ. ಮಹಾನ್ ಶಕ್ತಿವಂತೆ. ಸಾಕ್ಷಾತ್ ಕಾಳಿಯೇ ನೀನು" ಎನ್ನುವ ಭಕ್ತಿಭರಿತ ಭಾವನೆಗಳು ಕೋಮುವಾದವಾಗಿಬಿಟ್ಟವು.

ಬಂಕಿಮಚಂದ್ರರ "ಆನಂದ ಮಠ"ದಿಂದ -

ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ!

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದುಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ,
ಸುಖದಾಂ ವರದಾಂ ಮಾತರಂ

ವಂದೇ ಮಾತರಂ

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,
ಕೋಟಿ ಕೋಟಿ ಭುಜೈರ್ಧೃತಖರಕರವಾಲೇ
ಕೇ ಬೋಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ!

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ
ತ್ವಂ ಹೀ ಪ್ರಾಣಹ ಶರೀರೇ
ಬಾಹುತೇ ತುಮೀ ಮಾ ಶಕ್ತಿ, ಹೃದಯೇ ತುಮೀ ಮಾ ಭಕ್ತಿ
ತೊಮಾರಿ ಪ್ರತಿಮಾ ಗಡಿ ಮಂದಿರೇ ಮಂದಿರೇ

ತ್ವಂ ಹೀ ದುರ್ಗಾ ದಶ ಪ್ರಹರಣ ಧಾರಿಣೀ
ಕಮಲಾ ಕಮಲದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

ಶ್ಯಾಮಲಾಂ ಸರಳಾಂ ಸುಶ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ!
ವಂದೇ ಮಾತರಂ!