ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ! ನೀವು ಯಾವುದಾದರೊಂದು ಸಿನೆಮಾ ನೋಡಿದಾಗ, ಕಥೆ/ಕಾದಂಬರಿ ಓದಿದಾಗ ಎಷ್ಟೊಂದು ಪ್ರಶ್ನೆಗಳು ಏಳುತ್ತವೆ. ಆದರೆ ಕೆಲವೊಂದನ್ನು ನಾವು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವನು ಯಾಕೆ ಹಾಗೆ ಮಾಡಿದಾ... ಇವಳು ಯಾಕೆ ಹೀಗೆ ಮಾಡಿದಳು..? ಮೆಗಾ ಸೀರಿಯಲ್ಗಳನ್ನು ನೋಡಬೇಕಾದರಂತೂ ಒಂದೇ ಪ್ರಶ್ನೆ! ’ಇವರು ಯಾವಾಗ ಕಥೆ ಮುಂದುವರಿಸುತ್ತಾರೆ ?’. ಆಶ್ಚರ್ಯ ಎಂದರೆ ಕಾಲೇಜಿನಲ್ಲಿ ಪಾಠ ಕೇಳುವಾಗ ಮಾತ್ರ ಇಂತಹ ಸಮಸ್ಯೆಗಳು ಬರಲೇ ಇಲ್ಲಾ. ನಮ್ಮ ಲಕ್ಚರರ್ಗಳಿಗೇ ಇದರ ಕ್ರೆಡಿಟ್ ಸಲ್ಲಬೇಕು. ಇಂಜಿನಿಯರಿಂಗ್ನಲ್ಲಂತೂ ಪ್ರಶ್ನೆಗಳು ಉಧ್ಬವಿಸುವುದು ಹೋಗಲಿ ಪರೀಕ್ಷೆಯಲ್ಲಿ ಕುಳಿತಾಗ ಪ್ರಶ್ನೆಗಳಿಗೆ ಉತ್ತರಗಳೂ ಉದ್ಭವಿಸುತ್ತಿರಲಿಲ್ಲ. ಇದಕ್ಕೂ ಕ್ರೆಡಿಟ್ ಲಕ್ಚರರ್ಗಳಿಗೇ ಹೋಗಬೇಕಾದರೂ ನಮ್ಮ ಪಾಲೂ ಕೊಂಚ ಇದೆ.
ಚಿಕ್ಕಂದಿನಿಂದಲೂ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮದಲ್ಲ. ಕೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಲೇ ಬೆಳೆದಿರುವುದು ನಾವು. ಆದರೂ ಇತ್ತೀಚೆಗೆ ಜೀವನದ ಕೆಲವು ಬಗೆಹರಿಸಲಾಗದ ಸಮಸ್ಯೆಗಳು ಕಣ್ಣೆದುರಿಗೆ ಬಂದು ನಿಂತಾಗ ಅದರ ಬಗೆಗೆ ಯೋಚಿಸತೊಡಗುತ್ತೇವೆ. ಪ್ರಶ್ನೆಗಳು ಮೂಡುತ್ತವೆ. ಬೆಂಗಳೂರಿನಲ್ಲಿ ಬಹು ಅಪರೂಪಕ್ಕೆ ಮಳೆಗಾಲದಲ್ಲಿ ಮಳೆ. ಮನೆ ಎನ್ನುವುದು ಧೋಬಿಘಾಟ್ ಆಗಿ ಹೋಗಿದೆ. ಬಟ್ಟೆ ಹೊರಗೆ ಒಣಗಿಸುವಂತಿಲ್ಲ. ಒಳಗೆ ಒಣಗಿಸಿದರೆ ನಾಲ್ಕು ದಿನವಾದರೂ ಒಣಗುವುದಿಲ್ಲ. ಪ್ಯಾಂಟು ಶರ್ಟು, ಮನೆಯಲ್ಲಿ ಬರ್ಮುಡಾ ಧರಿಸುತ್ತಿರುವ ನಮಗೇ ಇಷ್ಟು ಸಮಸ್ಯೆಯಾದರೆ ಮಹಾಭಾರತದ ಕಾಲದಲ್ಲಿ ಕೌರವರ ಮನೆಯಲ್ಲಿ, ಗಂಡ ಹೆಂಡತಿ ಹಾಗೂ ನೂರಾಒಂದು ಮಕ್ಕಳಿದ್ದ ಆ ಮನೆಯಲ್ಲಿ ಇನ್ನೆಷ್ಟು ಸಮಸ್ಯೆ ಆಗಿರಲಿಕ್ಕೆ ಸಾಕು? ಮನೆಯಲ್ಲಿ ಬಟ್ಟೆ ಒಣಗಿಸಲಿಕ್ಕೆ ಜಾಗ ಹುಡುಕುವವರೇ ಎರಡು ಜನರಿದ್ದಿರಬೇಕು! ಬಹುಷಃ ಪ್ರತಿಯೊಬ್ಬರ ರೂಮಿನಲ್ಲಿ, ಮಧ್ಯ ಕಾರಿಡಾರ್ನಲ್ಲಿ, ಕೊನೆಗೆ ರಾಜಸಭೆಯಲ್ಲೂ ಸೀರೆ, ಪಂಚೆ ಒಣಗಿಸುತ್ತಿದ್ದರೇನೋ... ವ್ಯಾಸರಿಗೇ ಗೊತ್ತು.
ನನ್ನನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಇದಲ್ಲಾ. ನಾನು, ಕೆಲವು ಸಲ ನನ್ನ ತಮ್ಮ, ಊರಿಗೆ ಹೋದಾಗ ಅಪ್ಪನನ್ನು ಸೇರಿಸಿ ಮನೆಯಲ್ಲಿರುವವರು ಮೂರೇ ಜನ ಗಂಡಸರು. ಆದರೂ ಎಷ್ಟೋ ಬಾರಿ ಒಳ ಉಡುಪುಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಾಗಿವೆ. ಈಗಂತೂ ನನ್ನ ಬ್ರಾಂಡ್ ಇದೇ ಕಾರಣಕ್ಕೋಸ್ಕರ ಬದಲಾಯಿಸಿಕೊಂಡುಬಿಟ್ಟಿದ್ದೇನೆ! ನಿಕ್ಕರ್ ಹೇಗೋ ಕಂಡುಹಿಡಿದುಬಿಡಬಹುದು. ಈ ಬನಿಯನ್ಗಳದ್ದೇ ತಾಪತ್ರಯ. ಎಷ್ಟು ಬಾರಿ ಬೇರೆಯವರದ್ದನ್ನು ಧರಿಸಿದ್ದೇನೋ ಗೊತ್ತಿಲ್ಲ. ಇದನ್ನು ನೆನೆದುಕೊಂಡಾಗೆಲ್ಲಾ ನನಗೆ ಕಾಡುವ ಪ್ರಶ್ನೆ, ಮಹಾಭಾರತದ ಕಾಲದಲ್ಲಿ, ಕೌರವರ ಮನೆಯಲ್ಲಿನ ಪರಿಸ್ಥಿತಿ ಹೀಗಿದ್ದೀತು? ಆಗ ಚಡ್ಡಿ ಬಳಸುತ್ತಿದ್ದರೋ ಅಥವಾ ಲಂಗೋಟಿಯೋ? ಏನೇ ಆಗಲಿ... ನೂರಾಒಂದು ಜನ! ಎಲ್ಲರ ಲಂಗೋಟಿಗಳನ್ನಂತೂ ದಿನನಿತ್ಯವೂ ತೊಳೆಯಲೇ ಬೇಕು. ನೂರಾಒಂದು ಲಂಗೋಟಿಗಳನ್ನು ಎಲ್ಲಿ ಒಣಗಿಸುತ್ತಿದ್ದರು? ಒಂದೇ ಕಡೆ ಒಣಗಿಸಿಬಿಟ್ಟರೆ ಮುಗಿಯಿತು. ದಿನನಿತ್ಯವೂ ಬೇರೆ ಬೇರೆಯವರದ್ದೇ ಲಂಗೋಟಿಗಳು. ಎಲ್ಲರೂ ತಮ್ಮ ತಮ್ಮ ಬಚ್ಚಲಿನಲ್ಲೇ ಒಣಗಿಸಿಕೊಳ್ಳುತ್ತಿದ್ದರೂ ಎಂದಿಟ್ಟುಕೊಂಡರೆ, ಮನೆಯಲ್ಲಿ ಕನಿಷ್ಟ ಎಂದರೂ ನೂರಾಒಂದು ರೂಮುಗಳು.. ವಿಥ್ ಅಟ್ಯಾಚಡ್ ಬಾಥ್! ನಮ್ಮ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆಯಂತೆ! ಬರಗೆಟ್ಟ ಸ್ಥಿತಿಯಲ್ಲೂ ರಾಷ್ಟ್ರಪತಿಗೆ ಇಷ್ಟೊಂದು ಐಶಾರಾಮೀ ಜೀವನ ಇರಬೇಕಾದರೆ, ರಾಜರ ಕಾಲದಲ್ಲಿ, ಕೌರವೇಶ್ವರನಿಗೆ ಇಷ್ಟೂ ಇಲ್ಲದಿದ್ದರೆ ಹೇಗೆ? ಆದರೂ ಕನ್ಫ್ಯೂಜನ್ ಬೇಡಾ ಎಂದು ಲಂಗೋಟಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ಹೊಲಿಸಿಬಿಡುತ್ತಿದ್ದರು ಎಂಬುದೇ ನನ್ನ ಊಹೆ.
ನೂರಾಒಂದನೆಯದು ಹೆಣ್ಣಾದುದರಿಂದ ಅವಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದಿಟ್ಟುಕೊಂಡರೆ, ಕೌರವರ ಈ ನೂರು ಮಕ್ಕಳು, ಅವರ ಹೆಂಡಿರುಗಳು, ಅವರ ಮಕ್ಕಳುಗಳು, ಒಟ್ಟಾಗಿ, ಕನಿಷ್ಟಪಕ್ಷ, ಒಂದು ನಾನೂರು ಐನೂರು ಜನರಾದರೂ ಇದ್ದಾರು. ಇವರೆಲ್ಲರೂ ಬೆಳಿಗ್ಗೆ ಶೌಚಕ್ಕೆ ಹೋಗಬೇಕು ಎಂದರೆ ಒಟ್ಟೂ ಎಷ್ಟು ಪಾಯಖಾನೆಗಳನ್ನು ಕಟ್ಟಿಸಿಯಾರು? ನಮ್ಮ ಮನೆಯಲ್ಲಿ ಎರಡು ಪಾಯಿಖಾನೆ ಇದ್ದು ಆರು ಜನರಿದ್ದಾಗಲೇ ಎಷ್ಟೋ ಬಾರಿ ಟೈಮಿಂಗ್ ಕ್ಲಾಷ್ ಆಗುತ್ತಿತ್ತು. ಕೌರವರ ಮನೆಯಲ್ಲಿ ಆಗದೇ ಇದ್ದೀತೇ? ಎಲ್ಲರ ರೂಮಿನಲ್ಲಿ ಕೊಮೋಡ್ ಅಂತೂ ಇರಲಿಕ್ಕೆ ಸಾಧ್ಯವಿಲ್ಲ. ಯಾಕಂದರೆ ಅದು ಈಗಿನ ಪದ್ಧತಿ. ಎಲ್ಲರೂ ಬಯಲಿಗೆ ಹೋಗುತ್ತಿದ್ದರು ಎನ್ನುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ರಾಜಮನೆತನದವರು. ಬಯಲಿಗೆ ಹೋದರೆ ಜನಸಾಮಾನ್ಯರು ಏನು ಮಾಡಬೇಕು. ಬೆಳಿಗ್ಗೆಯಿಂದ ಪಾಯಿಖಾನೆಗೆ ಕ್ಯೂ ನಿಲ್ಲುತ್ತಿದ್ದರು ಎಂದಿಟ್ಟುಕೊಂಡರೆ ಕೆಲವರ ಸರದಿ ಬರುವಷ್ಟರಲ್ಲಿ ಮಾರನೇ ದಿನವೇ ಆಗಿಹೋಗುತ್ತಿತ್ತೋ ಏನೊ. ಸಾಲಾಗಿ ನಾನೂರು ಪಾಯಖಾನೆ ಕಟ್ಟಿಸಿಟ್ಟಿದ್ದರು ಎಂದಿಟ್ಟುಕೊಂಡರೆ ಅದರಲ್ಲಿ ಖಾಲಿ ಯಾವುದಿದೆ ಎಂದು ಕಂಡುಹಿಡಿಯುವುದಕ್ಕೆ ಏನಾದರೂ ಉಪಾಯ ಮಾಡಿರಲೇ ಬೇಕು. ಇಲ್ಲದಿದ್ದರೆ ಹುಡುಕುವಷ್ಟರಲ್ಲೇ ಅವಘಡ ಸಂಭಿವಿಸುವ ಸಾಧ್ಯತೆಗಳೇ ಜಾಸ್ತಿ. ಈ ಸಮಸ್ಯೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ವ್ಯಾಸರೇ ಹೇಳಬೇಕು.
ಒಟ್ಟಿನಲ್ಲಿ ನನಗನಿಸುವುದೇನಪ್ಪಾ ಅಂದರೆ, ಈ ಎಲ್ಲಾ ಕಾರಣಗಳಿಗೇ, ಕೌರವರಿಗೆ ವಿದ್ಯಾಭ್ಯಾಸಕ್ಕೆ, ಶಸ್ತ್ರಾಭ್ಯಾಸಕ್ಕೆ ಸಮಯವಿಲ್ಲದೆ ಎಲ್ಲರೂ ಕೆಲಸಕ್ಕೆ ಬಾರದವರಾಗಿ, ಪಾಂಡವರ ಎದುರು ಸೋಲಬೇಕಾಯಿತು! ಅದಕ್ಕೇ ಹಿರಿಯರು ಹೇಳಿದ್ದು.
ಚಿಕ್ಕ ಸಂಸಾರ... ಚೊಕ್ಕ ಸಂಸಾರ...
ಒಂದೇ ಪಾಯಖಾನೆಯಿದ್ದರೂ ಎಲ್ಲರಿಗೂ ಸಸಾರ!
ಚಿಕ್ಕಂದಿನಿಂದಲೂ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮದಲ್ಲ. ಕೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಲೇ ಬೆಳೆದಿರುವುದು ನಾವು. ಆದರೂ ಇತ್ತೀಚೆಗೆ ಜೀವನದ ಕೆಲವು ಬಗೆಹರಿಸಲಾಗದ ಸಮಸ್ಯೆಗಳು ಕಣ್ಣೆದುರಿಗೆ ಬಂದು ನಿಂತಾಗ ಅದರ ಬಗೆಗೆ ಯೋಚಿಸತೊಡಗುತ್ತೇವೆ. ಪ್ರಶ್ನೆಗಳು ಮೂಡುತ್ತವೆ. ಬೆಂಗಳೂರಿನಲ್ಲಿ ಬಹು ಅಪರೂಪಕ್ಕೆ ಮಳೆಗಾಲದಲ್ಲಿ ಮಳೆ. ಮನೆ ಎನ್ನುವುದು ಧೋಬಿಘಾಟ್ ಆಗಿ ಹೋಗಿದೆ. ಬಟ್ಟೆ ಹೊರಗೆ ಒಣಗಿಸುವಂತಿಲ್ಲ. ಒಳಗೆ ಒಣಗಿಸಿದರೆ ನಾಲ್ಕು ದಿನವಾದರೂ ಒಣಗುವುದಿಲ್ಲ. ಪ್ಯಾಂಟು ಶರ್ಟು, ಮನೆಯಲ್ಲಿ ಬರ್ಮುಡಾ ಧರಿಸುತ್ತಿರುವ ನಮಗೇ ಇಷ್ಟು ಸಮಸ್ಯೆಯಾದರೆ ಮಹಾಭಾರತದ ಕಾಲದಲ್ಲಿ ಕೌರವರ ಮನೆಯಲ್ಲಿ, ಗಂಡ ಹೆಂಡತಿ ಹಾಗೂ ನೂರಾಒಂದು ಮಕ್ಕಳಿದ್ದ ಆ ಮನೆಯಲ್ಲಿ ಇನ್ನೆಷ್ಟು ಸಮಸ್ಯೆ ಆಗಿರಲಿಕ್ಕೆ ಸಾಕು? ಮನೆಯಲ್ಲಿ ಬಟ್ಟೆ ಒಣಗಿಸಲಿಕ್ಕೆ ಜಾಗ ಹುಡುಕುವವರೇ ಎರಡು ಜನರಿದ್ದಿರಬೇಕು! ಬಹುಷಃ ಪ್ರತಿಯೊಬ್ಬರ ರೂಮಿನಲ್ಲಿ, ಮಧ್ಯ ಕಾರಿಡಾರ್ನಲ್ಲಿ, ಕೊನೆಗೆ ರಾಜಸಭೆಯಲ್ಲೂ ಸೀರೆ, ಪಂಚೆ ಒಣಗಿಸುತ್ತಿದ್ದರೇನೋ... ವ್ಯಾಸರಿಗೇ ಗೊತ್ತು.
ನನ್ನನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಇದಲ್ಲಾ. ನಾನು, ಕೆಲವು ಸಲ ನನ್ನ ತಮ್ಮ, ಊರಿಗೆ ಹೋದಾಗ ಅಪ್ಪನನ್ನು ಸೇರಿಸಿ ಮನೆಯಲ್ಲಿರುವವರು ಮೂರೇ ಜನ ಗಂಡಸರು. ಆದರೂ ಎಷ್ಟೋ ಬಾರಿ ಒಳ ಉಡುಪುಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಾಗಿವೆ. ಈಗಂತೂ ನನ್ನ ಬ್ರಾಂಡ್ ಇದೇ ಕಾರಣಕ್ಕೋಸ್ಕರ ಬದಲಾಯಿಸಿಕೊಂಡುಬಿಟ್ಟಿದ್ದೇನೆ! ನಿಕ್ಕರ್ ಹೇಗೋ ಕಂಡುಹಿಡಿದುಬಿಡಬಹುದು. ಈ ಬನಿಯನ್ಗಳದ್ದೇ ತಾಪತ್ರಯ. ಎಷ್ಟು ಬಾರಿ ಬೇರೆಯವರದ್ದನ್ನು ಧರಿಸಿದ್ದೇನೋ ಗೊತ್ತಿಲ್ಲ. ಇದನ್ನು ನೆನೆದುಕೊಂಡಾಗೆಲ್ಲಾ ನನಗೆ ಕಾಡುವ ಪ್ರಶ್ನೆ, ಮಹಾಭಾರತದ ಕಾಲದಲ್ಲಿ, ಕೌರವರ ಮನೆಯಲ್ಲಿನ ಪರಿಸ್ಥಿತಿ ಹೀಗಿದ್ದೀತು? ಆಗ ಚಡ್ಡಿ ಬಳಸುತ್ತಿದ್ದರೋ ಅಥವಾ ಲಂಗೋಟಿಯೋ? ಏನೇ ಆಗಲಿ... ನೂರಾಒಂದು ಜನ! ಎಲ್ಲರ ಲಂಗೋಟಿಗಳನ್ನಂತೂ ದಿನನಿತ್ಯವೂ ತೊಳೆಯಲೇ ಬೇಕು. ನೂರಾಒಂದು ಲಂಗೋಟಿಗಳನ್ನು ಎಲ್ಲಿ ಒಣಗಿಸುತ್ತಿದ್ದರು? ಒಂದೇ ಕಡೆ ಒಣಗಿಸಿಬಿಟ್ಟರೆ ಮುಗಿಯಿತು. ದಿನನಿತ್ಯವೂ ಬೇರೆ ಬೇರೆಯವರದ್ದೇ ಲಂಗೋಟಿಗಳು. ಎಲ್ಲರೂ ತಮ್ಮ ತಮ್ಮ ಬಚ್ಚಲಿನಲ್ಲೇ ಒಣಗಿಸಿಕೊಳ್ಳುತ್ತಿದ್ದರೂ ಎಂದಿಟ್ಟುಕೊಂಡರೆ, ಮನೆಯಲ್ಲಿ ಕನಿಷ್ಟ ಎಂದರೂ ನೂರಾಒಂದು ರೂಮುಗಳು.. ವಿಥ್ ಅಟ್ಯಾಚಡ್ ಬಾಥ್! ನಮ್ಮ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆಯಂತೆ! ಬರಗೆಟ್ಟ ಸ್ಥಿತಿಯಲ್ಲೂ ರಾಷ್ಟ್ರಪತಿಗೆ ಇಷ್ಟೊಂದು ಐಶಾರಾಮೀ ಜೀವನ ಇರಬೇಕಾದರೆ, ರಾಜರ ಕಾಲದಲ್ಲಿ, ಕೌರವೇಶ್ವರನಿಗೆ ಇಷ್ಟೂ ಇಲ್ಲದಿದ್ದರೆ ಹೇಗೆ? ಆದರೂ ಕನ್ಫ್ಯೂಜನ್ ಬೇಡಾ ಎಂದು ಲಂಗೋಟಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ಹೊಲಿಸಿಬಿಡುತ್ತಿದ್ದರು ಎಂಬುದೇ ನನ್ನ ಊಹೆ.
ನೂರಾಒಂದನೆಯದು ಹೆಣ್ಣಾದುದರಿಂದ ಅವಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದಿಟ್ಟುಕೊಂಡರೆ, ಕೌರವರ ಈ ನೂರು ಮಕ್ಕಳು, ಅವರ ಹೆಂಡಿರುಗಳು, ಅವರ ಮಕ್ಕಳುಗಳು, ಒಟ್ಟಾಗಿ, ಕನಿಷ್ಟಪಕ್ಷ, ಒಂದು ನಾನೂರು ಐನೂರು ಜನರಾದರೂ ಇದ್ದಾರು. ಇವರೆಲ್ಲರೂ ಬೆಳಿಗ್ಗೆ ಶೌಚಕ್ಕೆ ಹೋಗಬೇಕು ಎಂದರೆ ಒಟ್ಟೂ ಎಷ್ಟು ಪಾಯಖಾನೆಗಳನ್ನು ಕಟ್ಟಿಸಿಯಾರು? ನಮ್ಮ ಮನೆಯಲ್ಲಿ ಎರಡು ಪಾಯಿಖಾನೆ ಇದ್ದು ಆರು ಜನರಿದ್ದಾಗಲೇ ಎಷ್ಟೋ ಬಾರಿ ಟೈಮಿಂಗ್ ಕ್ಲಾಷ್ ಆಗುತ್ತಿತ್ತು. ಕೌರವರ ಮನೆಯಲ್ಲಿ ಆಗದೇ ಇದ್ದೀತೇ? ಎಲ್ಲರ ರೂಮಿನಲ್ಲಿ ಕೊಮೋಡ್ ಅಂತೂ ಇರಲಿಕ್ಕೆ ಸಾಧ್ಯವಿಲ್ಲ. ಯಾಕಂದರೆ ಅದು ಈಗಿನ ಪದ್ಧತಿ. ಎಲ್ಲರೂ ಬಯಲಿಗೆ ಹೋಗುತ್ತಿದ್ದರು ಎನ್ನುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ರಾಜಮನೆತನದವರು. ಬಯಲಿಗೆ ಹೋದರೆ ಜನಸಾಮಾನ್ಯರು ಏನು ಮಾಡಬೇಕು. ಬೆಳಿಗ್ಗೆಯಿಂದ ಪಾಯಿಖಾನೆಗೆ ಕ್ಯೂ ನಿಲ್ಲುತ್ತಿದ್ದರು ಎಂದಿಟ್ಟುಕೊಂಡರೆ ಕೆಲವರ ಸರದಿ ಬರುವಷ್ಟರಲ್ಲಿ ಮಾರನೇ ದಿನವೇ ಆಗಿಹೋಗುತ್ತಿತ್ತೋ ಏನೊ. ಸಾಲಾಗಿ ನಾನೂರು ಪಾಯಖಾನೆ ಕಟ್ಟಿಸಿಟ್ಟಿದ್ದರು ಎಂದಿಟ್ಟುಕೊಂಡರೆ ಅದರಲ್ಲಿ ಖಾಲಿ ಯಾವುದಿದೆ ಎಂದು ಕಂಡುಹಿಡಿಯುವುದಕ್ಕೆ ಏನಾದರೂ ಉಪಾಯ ಮಾಡಿರಲೇ ಬೇಕು. ಇಲ್ಲದಿದ್ದರೆ ಹುಡುಕುವಷ್ಟರಲ್ಲೇ ಅವಘಡ ಸಂಭಿವಿಸುವ ಸಾಧ್ಯತೆಗಳೇ ಜಾಸ್ತಿ. ಈ ಸಮಸ್ಯೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ವ್ಯಾಸರೇ ಹೇಳಬೇಕು.
ಒಟ್ಟಿನಲ್ಲಿ ನನಗನಿಸುವುದೇನಪ್ಪಾ ಅಂದರೆ, ಈ ಎಲ್ಲಾ ಕಾರಣಗಳಿಗೇ, ಕೌರವರಿಗೆ ವಿದ್ಯಾಭ್ಯಾಸಕ್ಕೆ, ಶಸ್ತ್ರಾಭ್ಯಾಸಕ್ಕೆ ಸಮಯವಿಲ್ಲದೆ ಎಲ್ಲರೂ ಕೆಲಸಕ್ಕೆ ಬಾರದವರಾಗಿ, ಪಾಂಡವರ ಎದುರು ಸೋಲಬೇಕಾಯಿತು! ಅದಕ್ಕೇ ಹಿರಿಯರು ಹೇಳಿದ್ದು.
ಚಿಕ್ಕ ಸಂಸಾರ... ಚೊಕ್ಕ ಸಂಸಾರ...
ಒಂದೇ ಪಾಯಖಾನೆಯಿದ್ದರೂ ಎಲ್ಲರಿಗೂ ಸಸಾರ!