Monday, June 15, 2015

ಭಾಗ್ಯದ ಸಿದ್ದ ರಾಮಣ್ಣ

ಭಾಗ್ಯ ಬಹಳ ಸುದ್ದಿ ಮಾಡ್ತಾ ಇದೆ. ಇದು ಜನರ ದೌರ್ಭಾಗ್ಯವೋ.. ಸರ್ಕಾರದ ದೌರ್ಭಾಗ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಚಿವರು ಒಂದು ಹೇಳುವುದು.. ಮುಖ್ಯಮಂತ್ರಿ ಇನ್ನೊಂದು ಹೇಳುವುದು,
ಇದರ ಮಧ್ಯೆ ಜನ, ಸಾಹಿತಿಗಳು ಭಾಗ್ಯಗಳ ಬಗ್ಗೆ ಮಗದೊಂದು ಹೇಳುವುದು ಮುಂದುವರೆದಿದೆ... ಈ ಎಲ್ಲಾ ಭಾಗ್ಯಗಳ ಮಧ್ಯದಲ್ಲಿ ನಿಮಗೊಂದು ರೀಮಿಕ್ಸ್ ಭಾಗ್ಯ !
’ಪುರಂದರ ದಾಸ’ರ ಕ್ಷಮೆ ಕೋರಿ... ಹಾಗೂ ಮಾನ್ಯ ಮುಖ್ಯಮಂತ್ರಿಗಳು ನಗೆಚಾಟಿಕೆಯನ್ನು ಹಾಗೇ ಸ್ವೀಕರಿಸಿ ನನ್ನನ್ನು arrest ಮಾಡಿಸುವುದಿಲ್ಲ ಎಂದು ಭಾವಿಸಿ... :P


ಭಾಗ್ಯದ ಸಿದ್ದ ರಾಮಣ್ಣ
ನಮ್ಮಪ್ಪ, ನೀ ಸೌಭಾಗ್ಯದ ಸಿದ್ದ ರಾಮಣ್ಣ

ಕೆಂಪು ದೀಪದ ವಾಹನವೇರುತ
ಜನರನು ಹೋಗದೆ ಬಿಡದೆಯೆ ನಿಲಿಸುತ
ಪ್ರಜೆಗಳು ಕೆಲಸಕೆ ಹೋಗುವ ವೇಳೆಗೆ
ಅಡ್ದಕೆ ಹಾಯುವ ಮಾರ್ಜಾಲದಂತೆ

ಕುಂತರೆ ನೀನು ಭಾಗ್ಯವ ಬಿಟ್ಟೆ
ನಿಂತರೆ ನೀನು ಭಾಗ್ಯವ ಬಿಟ್ಟೆ
ಭಾಗ್ಯದ ಮೇಲೆ ಭಾಗ್ಯವ ಬಿಡುವ
ಭರದಲಿ ರಾಜ್ಯಭಾರವ ಮರೆತೆ

ಕ್ಷೀರ ಭಾಗ್ಯದಿ ಹಾಲನು ಹರಿಸಿ
ಅನ್ನ ಭಾಗ್ಯದಿ ಅನ್ನವ ಉಣಿಸಿ
ಪಶು ಭಾಗ್ಯದಿ ಪಶುಗಳ ಬೆಳೆಸಿ
ಶಾದಿ ಭಾಗ್ಯದಿ ಮಲಗಿಸಿ ಬಿಟ್ಟೆ

ಮಾತು ಮಾತಿಗೆ ದಿಲ್ಲಿಗೋಡಿದೆ
ಸಭೆ ಸಮಾರಂಭದಿ ತೂಕಡಿಸಿದೆ
ಇಂದಿರೆ ಬದಲು ಸೋನಿಯಾ ಅಂದೆ
ಕಾಂಗ್ರೆಸ್ ರಾಣಿಗೆ ಸಲಾಮು ಹೊಡೆದೆ

Tuesday, April 14, 2015

ಹುಣ್ಣು

ಭವಿಷ್ಯದಲ್ಲಿ ಏನಾಗುಬಹುದು ಎಂದು ಸರಿಯಾಗಿ ಊಹಿಸುವವನು... ಅಥವಾ ಈಗಿನ ಸಮಸ್ಯೆಗೆ ಹೀಗೆ ಮಾಡಿದರೆ ಭವಿಷ್ಯದಲ್ಲಿ ಇದಕ್ಕೆ ಪರಿಹಾರ ಸಿಗಬಹುದು ಎಂದು ಸರಿಯಾದ ಹೆಜ್ಜೆ ಇಡುವವನು ದಾರ್ಶನಿಕ (visionary). ಯಾಕೋ ಇವತ್ತಿನ ಪರಿಸ್ಥಿತಿ ನೋಡಿದರೆ ನಿಮ್ಮ ಜನರನ್ನು ನೀವೇ ಅರ್ಥ ಮಾಡಿಕೊಂಡಿರಲಿಲ್ಲ ಎನಿಸುತ್ತಿದೆ! 

Anyway... ಡಾ. ಅಂಬೇಡ್ಕರರ ಜಯಂತಿಯ ಪ್ರಯುಕ್ತ .. ನಾಡಿನ ಸಮಸ್ತ ಬುದ್ಧಿಜೀವಿಗಳಿಗೆ ನನ್ನ ಒಂದು ಚಿಕ್ಕ ಕೊಡುಗೆ..

ವಿರೋಧಕ್ಕಾಗಿ ಹೋರಾಟ ಬೀದಿಗಳಲ್ಲಿ ಬಯಲಾಟ
ಪ್ರಚಾರಕ್ಕಾಗಿ ಹಾರಾಟ ಆದರ್ಶಗಳ ಮಾರಾಟ
ನಿಜವಾಗಿಯೂ ಏಳ್ಗೆಯ ಕನಸನ್ನು ಕಂಡೆಯಾ
ಅಥವಾ ಕಣ್ಣು ಮುಚ್ಚಿ ದನದ ಮಾಂಸ ತಿಂದೆಯಾ?


ಜ್ನಾನಕ್ಕೆ ಪೀಠವೇ ಪೀಠಕ್ಕೆ ಜಾತಿಯೇ
ಶಾರದೆಗೂ ಜಾತಿಯ ಮೇಲೆಯೇ ಪ್ರೀತಿಯೇ
ಆ ಜಾತಿ ಈ ಜಾತಿ ಎಲ್ಲಾ ಒಂದೇ ಜಾತಿ
ಹುಣ್ಣಾದರೆ ಕೆರೆದುಕೊಳ್ಳುವ ಜಾತಿ

ನೋಡಿದರು ಕೆಲವರು ಹುಣ್ಣಿಗೆ ಮುಲಾಮು ಹಚ್ಚಿ
ನೋಡಿದರು ಕೆಲವರು ತಮ್ಮ ಬಾಯಿ ಮುಚ್ಚಿ
ಮಾಸಿತೆಂದುಕೊಂಡರೆ ಹುಣ್ಣು ಹುಟ್ಟಿತೆಲೆ ಮತ್ತೊಂದು
ಕೆಲವರು ಸುಖಿಸಿದರು ಹುಣ್ಣನ್ನು ಪರರಿಗೆ ಹಚ್ಚಿ

- ಸಿದ್ಧಾರ್ಥ