Friday, March 4, 2011

ಹೊಸಚೇತನ


ಭಾವನೆಗಳಿಗೆ ರೂಪ ಹೇಗೆ ನೀಡಲಿ
ಪದಗಳು ಅಡಗಿವೆ ಮರೆಯಲಿ
ಸಂತಸವ ಜನರೊಳು ಹೇಗೆ ಹಂಚಲಿ
ಮಿಂಚು ಹೊಮ್ಮಿದೆ ಮನದಲಿ

ಅರಿಯದ ಅನೇಕ ಭಾವ ಹೊಮ್ಮಿದೆ
ನಿನ್ನ ನಗೆಯ ಮಾಟದಿ
ಕಾಣದ ಲೋಕವ ಕಂಡು ಸುಖಿಸಿದೆ
ನಿನ್ನ ಕಂಗಳ ನೋಟದಿ

ಮುದ್ದು ಕೃಷ್ಣನೆ ಹಿಗ್ಗು ತಂದಿಹೆ
ನಮ್ಮ ಬಾಳನು ಬೆಳಗುತಾ
ಮೌನ ಗೀತೆಯ ಮನದಿ ತುಂಬಿದೆ
ನವ ಚೈತನ್ಯವ ಬೀರುತಾ

23-02-2011 ಬುಧವಾರ, ಮಾಘ ಬಹುಳ ಪಂಚಮಿಯಂದು ನನಗೆ ಅಪ್ಪನ ಸ್ಥಾನಕ್ಕೆ ಬಡ್ತಿ ಸಿಕ್ಕಿದೆ! ಕುಮಾರ ಕಂಠೀರವ ಧರೆಗೆ ಕಾಲಿಟ್ಟಿದ್ದಾನೆ.