Tuesday, November 13, 2007

ಮೊದಲ ತೊದಲು ನುಡಿ

ಡೈರಿ ಬರೆಯುವ ಹವ್ಯಾಸವಿಟ್ಟುಕೊಳ್ಳಬೇಕೆಂದುಕೊಂಡು, ಅದನ್ನು ಪೂರೈಸಿಕೊಳ್ಳಲಾಗದೇ ಹೋದುದಕ್ಕೆ ಈ ಬ್ಲಾಗಿನ ಪ್ರಯತ್ನ. ಅಷ್ಟಕ್ಕೂ ಯಾತಕ್ಕಾದರೂ ಬೇಕು ಈ ಬ್ಲಾಗ್ ? ಏಕೈಕ ಹಾಗೂ ಸರಳವಾದ ಉತ್ತರ "ಮನದಾಳದ ಮಾತುಗಳನ್ನು ತೆರೆದಿಡಲು". ಮನದ ಮಾತುಗಳನ್ನು ತೆರೆದಿಡುವ ಅವಶ್ಯಕತೆಯಾದರೂ ಏನು ?

ನಾಲ್ಕಾರು ಹಿರಿಯ ಸಾಹಿತಿಗಳ ಸಾಹಿತ್ಯವನ್ನೋ, ಕಾದಂಬರಿಗಳನ್ನೋ ಓದಿದ ಕೂಡಲೇ ನಮಗೂ ಏನಾದರೂ ಬರೆಯಬೇಕೆಂಬ ಹಂಬಲ ಹುಟ್ಟುವುದು ಸಹಜ. ಇದು ಆ ಸಾಹಿತಿಗಳಿಗೆ ಹೆಗ್ಗಳಿಕೆಯಷ್ಟೆ. ತಮ್ಮ ಸಾಹಿತ್ಯದ ಮೂಲಕ ಬೇರೆಯವರಲ್ಲೂ ಬರವಣಿಗೆಯ ಬಗ್ಗೆ ಆಸಕ್ತಿ ಮೂಡಿಸುವ ಆ ಹಿರಿಯ ಚೇತನಗಳಿಗೆ ಎಷ್ಟು ಕೃತಜ್ನತೆಗಳನ್ನು ಹೇಳಿದರೂ ಸಾಲದು.

ಇಂತಹದೇ ಸಾಹಸಕ್ಕೆ ಕೈ ಹಾಕಿರುವ ಸಾವಿರಾರು ’ಬ್ಲಾಗ್’ದಾರರಲ್ಲಿ ನಾನೂ ಒಬ್ಬನೆಂದರೆ ತಪ್ಪಾಗಲಾರದು. ನನ್ನ ಬ್ಲಾಗ್ ಪ್ರಾರಂಭಿಸಿದ ಇವತ್ತಿನ ದಿನವಾವುದೋ, ರಾಹುಕಾಲ ಎಂದಿದೆಯೋ ತಿಳಿಯದು. ಒಟ್ಟಿನಲ್ಲಿ ಈ ದಿನ ಕೆಲಸದಲ್ಲಿ ಆಸಕ್ತಿ ಮೂಡದಿರುವುದು ಇಂತಹ ಸದಭಿರುಚಿಯ ಕೆಲಸಕ್ಕೆ ಪ್ರೇರಣೆಯಾಯಿತು ಎಂಬುದು ಸಂತಸದ ವಿಷಯ. ಒಟ್ಟಿನಲ್ಲಿ ಇದೊಂದು ಕೇವಲ ಆರಂಭಶೂರತ್ವದ ಕೆಲಸವಾಗದಿರಲಿ ಎಂಬುದು ಆ ದೇವರಲ್ಲಿ ನನ್ನ ಪ್ರಾರ್ಥನೆ.

1 comment:

Deepak said...

ನಿನ್ನ ಮನದಾಳದ ಮಾತುಗಳು ಬ್ಲಾಗಿನ ರೂಪದಲ್ಲಿ ದಿನವೂ ಪ್ರಕಟಗೊಳ್ಳಲಿ :)

ಇ೦ತಿ,

ದೀಪಕ